ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವು ನಡೆಯಿತು.
ಕೊನೆಯ ದಿನವಾದ 01 ಆಗಸ್ಟ್ 2021 ಭಾನುವಾರ, ಗಂಗಾವತರಣ ತಾಳಮದ್ದಳೆ ಏರ್ಪಟ್ಟಿತು.
ಹಿಮ್ಮೇಳ: ಕುರಿಯ ಗಣಪತಿ ಶಾಸ್ತ್ರಿ, ಪುತ್ತೂರು ರಮೇಶ ಭಟ್, ಕೃಷ್ಣಪ್ರಕಾಶ್ ಉಳಿತ್ತಾಯ, ಸತ್ಯಜಿತ್ ರಾವ್ ರಾಯಿ; ಮುಮ್ಮೇಳ: ಉಜಿರೆ ಅಶೋಕ ಭಟ್, ಡಾ.ಶಾಂತಾರಾಮ ಪ್ರಭು ನಿಟ್ಟೂರು, ಡಾ.ಪದ್ಮನಾಭ ಸಿಬಂತಿ, ಶಶಾಂಕ ಅರ್ನಾಡಿ.