ಬ್ರಹ್ಮೈಕ್ಯ ಶ್ರೀಶ್ರೀ ಕೇಶವಾನಂದ ಭಾರತಿ ಶ್ರೀಗಳ ಪ್ರಥಮ ಆರಾಧನ ಸ್ಮೃತಿ ಪ್ರಯುಕ್ತ ಎಡನೀರು ಮಠದಲ್ಲಿ ಜು.26ರಿಂದ ಆ.1, 2021ರವರೆಗೆ ಯಕ್ಷಗಾನ ಸಪ್ತಾಹ ನಡೆಯುತ್ತಿದೆ. ಕಲಾವಿದ, ಸಂಘಟಕ ಉಜಿರೆ ಅಶೋಕ ಭಟ್ ನೇತೃತ್ವದಲ್ಲಿ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕಾರ್ಯಕ್ರಮವು ಪ್ರಸಿದ್ಧರ ಕೂಡುವಿಕೆಯಲ್ಲಿ ಕೂಟವನ್ನು ಏರ್ಪಡಿಸಲಾಗಿದೆ.
3ನೇ ದಿನವಾದ 28 ಜುಲೈ ಬುಧವಾರ ತರಣಿಸೇನ ಕಾಳಗ ತಾಳಮದ್ದಳೆ ಕೂಟ ಜರುಗಿತು.
ಹಿಮ್ಮೇಳ: ಪದ್ಯಾಣ ಗಣಪತಿ ಭಟ್, ಪುತ್ತೂರು ರಮೇಶ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವ ಕುಮಾರ್ ಐಲ; ಮುಮ್ಮೇಳ: ಜಬ್ಬಾರ್ ಸಮೊ ಸಂಪಾಜೆ, ಪೂಕಳ ಲಕ್ಷ್ಮೀನಾರಾಯಣ ಭಟ್, ಸದಾಶಿವ ಆಳ್ವ ತಲಪಾಡಿ, ಪನೆಯಾಲ ರವಿರಾಜ ಭಟ್