ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು 2024ರ ಜ.22ರಂದು ಅಯೋಧ್ಯೆಯಲ್ಲಿ ಅದ್ಭುತವಾದ ರಾಮ ಮಂದಿರವನ್ನು ಉದ್ಘಾಟಿಸಿದರು. ಇದೇ ಸಂದರ್ಭ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠಾಪನೆಯೂ ನಡೆದು, ರಾಮ ಜನ್ಮಭೂಮಿಯಾದ, ಸರಯೂ ನದಿ ತೀರದ ಅಯೋಧ್ಯೆ ಅಥವಾ ಅವಧಪುರದಲ್ಲಿ ಶ್ರೀರಾಮಚಂದ್ರನ ಭವ್ಯ, ದಿವ್ಯ ದೇವಾಲಯವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಈ ಸಂದರ್ಭ ಪ್ರಧಾನಿಯವರು ಹಂಚಿಕೊಂಡ, ಅಯೋಧ್ಯೆಯ ರಾಮ ಮಂದಿರದ ಸುಂದರ ದೃಶ್ಯಾವಳಿ, ಉದ್ಘಾಟನಾ ದಿನದ ವಿಶೇಷಗಳು, ಜನರು ಆನಂದಾಶ್ರು ಸುರಿಸುತ್ತಿರುವ ದೃಶ್ಯಗಳಿರುವ ವಿಡಿಯೊ ನಮ್ಮ ಓದುಗರಿಗಾಗಿ.