ಉಡುಪಿ: ಯಕ್ಷಗಾನ ಕಲಾರಂಗವು ಯಕ್ಷಗಾನದ ಹಿರಿಯ ಸಾಧಕರ ಸ್ಮರಣಾರ್ಥ ಹಾಗೂ ಗೌರವಾರ್ಥ ಪ್ರತಿವರ್ಷ ನೀಡುವ ಯಕ್ಷಗಾನ ಕಲಾರಂಗ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ತೆಂಕು ಹಾಗೂ ಬಡಗುತಿಟ್ಟಿನ 18 ಮಂದಿ ಕಲಾವಿದರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪ್ರತಿಯೊಂದು ಪ್ರಶಸ್ತಿಯೂ ತಲಾ ₹20,000 ರೂ. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದ್ದು, ನವೆಂಬರ್ 13ರಂದು ಭಾನುವಾರ ಮಂಗಳೂರು ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ ಎಂದು ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಳಿ ಕಡೆಕಾರ್ ತಿಳಿಸಿದ್ದಾರೆ.
ಯಕ್ಷಗಾನ.ಇನ್ ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ ಇಲ್ಲಿದೆ:
- ಡಾ. ಬಿ. ಬಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಡಿ. ಮನೋಹರ ಕುಮಾರ್, ಬಂಟ್ವಾಳ
- ನಿಟ್ಟೂರು ಸುಂದರ ಶೆಟ್ಟಿ-ಮಹೇಶ ಡಿ. ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಮಲವಳ್ಳಿ ನಾರಾಯಣ ಭಟ್, ಯಲ್ಲಾಪುರ
- ಕೆ. ವಿಶ್ವಜ್ಞ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಶ್ರೀ ರಾಮ ಜೋಗಿ, ಜೋಡುಕಲ್ಲು, ಕಾಸರಗೋಡು
- ಭಾಗವತ ನಾರ್ಣಪ್ಪ ಉಪ್ಪೂರ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಬಾಡ ಉಮೇಶ ಭಟ್, ಹೊನ್ನಾವರ
- ಶಿರಿಯಾರ ಮಂಜು ನಾಯ್ಕ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಕೆ. ಮಹಮ್ಮದ್ ಗೌಸ್, ಕಾವ್ರಾಡಿ, ಕುಂದಾಪುರ
- ಪಡಾರು ನರಸಿಂಹ ಶಾಸ್ತ್ರಿ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಎಸ್. ವೆಂಕಪ್ಪ ಆಚಾರ್ಯ, ಕಳಸ, ಚಿಕ್ಕಮಗಳೂರು
- ಮಲ್ಪೆ ಶಂಕರನಾರಾಯಣ ಸಾಮಗ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಎಮ್. ಲಕ್ಷ್ಮೀಶ ಅಮ್ಮಣ್ಣಾಯ, ಬೆಳ್ತಂಗಡಿ
- ಎಮ್. ತಿಮ್ಮಯ್ಯ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಕೂಟೇಲು ಬಾಲಕೃಷ್ಣ ಭಟ್, ಮಂಜೇಶ್ವರ
- ಶ್ರೀ ಕೊಳ್ಯೂರು ರಾಮಚಂದ್ರ ರಾವ್ ಗೌರವಾರ್ಥ ಪ್ರಶಸ್ತಿ: ಶ್ರೀ ಯು, ಆನಂದ, ಹಿರಿಯಡಕ
- ಪ್ರೊ. ಬಿ.ವಿ. ಆಚಾರ್ಯ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಜಿ. ಕೃಷ್ಣಸ್ವಾಮಿ ಜೋಯಿಸ್, ಬ್ರಹ್ಮಾವರ
- ಬಿ. ಜಗಜೀವನ್ ದಾಸ್ ಶೆಟ್ಟಿ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಎಸ್. ಅಣ್ಣಪ್ಪ ಕುಲಾಲ, ಮಂದಾರ್ತಿ
- ಕುತ್ಪಾಡಿ ಆನಂದ ಗಾಣಿಗ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಮುಂಡ್ಕೂರು ಕೃಷ್ಣ (ಕುಟ್ಟಿ) ಶೆಟ್ಟಿ, ಬೆಳ್ತಂಗಡಿ
- ದಶಾವತಾರಿ ಮಾರ್ವಿ ರಾಮಕೃಷ್ಣ ಹೆಬ್ಬಾರ್ - ಭಾಗವತ ವಾದಿರಾಜ ಹೆಬ್ಬಾರ್ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಐರ್ಬೈಲು ಆನಂದ ಶೆಟ್ಟಿ, ಕುಂದಾಪುರ
- ಕೋಟ ವೈಕುಂಠ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಜೋಗು ಕುಲಾಲ, ರಟ್ಟಾಡಿ, ಕುಂದಾಪುರ
- ಕಡಿಯಾಳಿ ಸುಬ್ರಾಯ ಉಪಾಧ್ಯ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಬಿ. ಕೆ. ಚೆನ್ನಪ್ಪ ಗೌಡ, ಸಜಿಪ, ಬಂಟ್ವಾಳ
- ಐರೋಡಿ ರಾಮ ಗಾಣಿಗ ಸ್ಮರಣಾರ್ಥ ಪ್ರಶಸ್ತಿ: ಶ್ರೀ ವಿದ್ವಾನ್ ಗಣಪತಿ ಭಟ್, ಯಲ್ಲಾಪುರ
- ಎಚ್. ಪರಮೇಶ್ವರ ಐತಾಳ್ ಸ್ಮರಣಾರ್ಥ ಪ್ರಶಸ್ತಿ: ಶ್ರೀ ಎಮ್. ನಿತ್ಯಾನಂದ ಹೆಬ್ಬಾರ್, ಹೊಸನಗರ, ಶಿವಮೊಗ್ಗ
- ಶ್ರೀಮತಿ ಪ್ರಭಾವತಿ ವಿ. ಶೆಣೈ-ಶ್ರೀ ಯು. ವಿಶ್ವನಾಥ ಶೆಣೈ ಗೌರವಾರ್ಥ ಪ್ರಶಸ್ತಿ: ಶ್ರೀ ಶಿವರಾಮ ಪಣಂಬೂರು, ಮಂಗಳೂರು
Tags:
ಸುದ್ದಿ