ಅಪಘಾತ: ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ ಇನ್ನಿಲ್ಲ


ಹೊನ್ನಾವರ: ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಬಳಿ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿಯಾದ ಪರಿಣಾಮವಾಗಿ ಯಕ್ಷಗಾನ ಭಾಗವತ ತಿಮ್ಮಪ್ಪ ಭಾಗವತ ಬಾಳೆಹದ್ದ (59) ಅವರು ಮಂಗಳವಾರ ಸಂಜೆ ನಿಧನರಾದರು.

ಯಕ್ಷಗಾನ ಹಾಗೂ ಸಂಗೀತದಲ್ಲಿ‌ಯೂ ಜ್ಞಾನ ಹೊಂದಿದ್ದ ತಿಮ್ಮಪ್ಪ ಭಾಗವತರು ಯಲ್ಲಾಪುರ ತಾಲೂಕಿನ ಹಿತ್ಲಳ್ಳಿ ಬಳಿ ದ್ವಿಚಕ್ರ ವಾಹನ-ಕಾರು ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.


ಪ್ರಸಿದ್ಧ ಭಾಗವತರಾಗಿದ್ದ ತಮ್ಮ ತಂದೆ ಕೃಷ್ಣ ಭಾಗವತ ಅವರಲ್ಲೇ ಯಕ್ಷಗಾನ ಭಾಗವತಿಕೆ ಕಲಿತಿದ್ದ ತಿಮ್ಮಪ್ಪ ಅವರು, ಹೊಸ್ತೋಟ ಮಂಜುನಾಥ ಭಾಗವತರಲ್ಲಿಯೂ ಶಿಷ್ಯತ್ವ ಪಡೆದಿದ್ದರು. ತಮ್ಮ ಬಾವ ಶ್ರೀಪಾದ ಹೆಗಡೆ ಕಂಪ್ಲಿ ಅವರಲ್ಲಿ ಸಂಗೀತ ಜ್ಞಾನವನ್ನೂ ಅಭ್ಯಸಿಸಿದ್ದ ಅವರು ಸೋಂದಾ ಯಕ್ಷಗಾನ ಬಳಗದಲ್ಲಿ ಗುರುತಿಸಿಕೊಂಡಿದ್ದರು. 

ರಂಗಾಯಣದ ಮೂಲಕ ಕೈದಿಗಳಿಗೆ ನಾಟಕ ಕಲಿಸುವ ತಂಡದಲ್ಲಿಯೂ ತಿಮ್ಮಪ್ಪ ಅವರು ಸಕ್ರಿಯರಾಗಿದ್ದು, ರಂಗಭೂಮಿಗೆ ಸಂಗೀತ ನೀಡುತ್ತಿದ್ದರು. ಇವರಿಗೆ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು