ಲೀಲಾವತಿ ಬೈಪಾಡಿತ್ತಾಯ, ಆರ್ಗೋಡು ಮೋಹನದಾಸ್ ಶೆಣೈಗೆ Karnataka Rajyotsav ಪ್ರಶಸ್ತಿ 2023

ಆರ್ಗೋಡು ಮೋಹನದಾಸ್ ಶೆಣೈ ಹಾಗೂ ಲೀಲಾವತಿ ಬೈಪಾಡಿತ್ತಾಯ

ಬೆಂಗಳೂರು: ಕರ್ನಾಟಕ ನಾಮಕರಣದ ಸುವರ್ಣ ವರ್ಷದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಕಲಾವಿದೆ, ವೃತ್ತಿ ಮೇಳಗಳಲ್ಲಿ ತಿರುಗಾಟ ಮಾಡಿದ ಮೊದಲ ಮಹಿಳೆ ಲೀಲಾವತಿ ಬೈಪಾಡಿತ್ತಾಯ ಹಾಗೂ ಬಡಗುತಿಟ್ಟಿನ ಹಿರಿಯ ಕಲಾವಿದ ಆರ್ಗೋಡು ಮೋಹನದಾಸ ಶೆಣೈ ಅವರು ಆಯ್ಕೆಯಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 68 ಸಾಧಕರು ಹಾಗೂ 10 ಸಂಸ್ಥೆಗಳ ಪಟ್ಟಿಯನ್ನು ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಘೋಷಿಸಿದರು.

ಪ್ರಶಸ್ತಿ ಪಡೆದವರಿಗೆ ₹5 ಲಕ್ಷ ನಗದು ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಸರ್ಕಾರ ಘೋಷಿಸಿದೆ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಸೇರಿದಂತೆ ಜಾಣಗೆರೆ ವೆಂಕಟರಾಮಯ್ಯ, ಎಚ್‌.ಎಲ್‌.ಪುಷ್ಪಾ, ವೀರಣ್ಣ ದಂಡೆ,  ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಕಾ.ತ.ಚಿಕ್ಕಣ್ಣ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ವಿಠಲ್‌ ಐ.ಬೆಣಗಿ, ಸಣ್ಣರಾಮ, ವೆಂಕಟರಾಮಯ್ಯ, ಎಂ.ಎಸ್‌.ಮೂರ್ತಿ, ಗೀತಾ ಶಿವಮೊಗ್ಗ,  ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ಚಂದ್ರ ಗುಪ್ತ, ಜೆ. ಲೋಕೇಶ್‌ ಇದ್ದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 2023 ಪಟ್ಟಿ ಇಲ್ಲಿದೆ:
ಸಂಗೀತ
ಡಾ.ನಯನ ಎಸ್. ಮೋರೆ (ಬೆಂಗಳೂರು)
ನೀಲಾ ಎಂ. ಕೊಡ್ಲಿ (ಧಾರವಾಡ)
ಶಬ್ಬೀರ್ ಅಹಮದ್‌(ಬೆಂಗಳೂರು)
ಡಾ ಎಸ್‌ ಬಾಳೇಶ ಭಜಂತ್ರಿ ( ಬೆಳಗಾವಿ)

ಚಲನಚಿತ್ರ
ಡಿಂಗ್ರಿ ನಾಗರಾಜ (ಬೆಂಗಳೂರು)
ವಿ ಜನಾರ್ದನ (ಬ್ಯಾಂಕ್‌ ಜನಾರ್ದನ) (ಬೆಂಗಳೂರು)

ರಂಗಭೂಮಿ
ಎ. ಜಿ. ಚಿದಂಬರ ರಾವ್‌ ಜಂಬೆ (ಶಿವಮೊಗ್ಗ)
ಪಿ. ಗಂಗಾಧರ ಸ್ವಾಮಿ ( ಮೈಸೂರು)
ಹೆಚ್‌. ಬಿ. ಸರೋಜಮ್ಮ( ಧಾರವಾಡ)
ತಯ್ಯಬಖಾನ್‌ ಎಂ ಇನಾಮದಾರ (ಬಾಗಲಕೋಟೆ)
ಡಾ. ವಿಶ್ವನಾಥ್ ವಂಶಾಕೃತ ಮಠ (ಬಾಗಲಕೋಟೆ)
ಪಿ. ತಿಪ್ಪೇಸ್ವಾಮಿ ( ಚಿತ್ರದುರ್ಗ)

ಶಿಲ್ಪಕಲೆ/ಚಿತ್ರಕಲೆ/ಕರಕುಶಲ
ಟಿ. ಶಿವಶಂಕರ್ (ದಾವಣಗೆರೆ)
ಕಾಳಪ್ಪ ವಿಶ್ವಕರ್ಮ (ರಾಯಚೂರು)
ಮಾರ್ಥಾ ಜಾಕಿಮೋವಿಚ್‌ (ಬೆಂಗಳೂರು)
ಪಿ. ಗೌರಯ್ಯ (ಮೈಸೂರು)

ಯಕ್ಷಗಾನ / ಬಯಲಾಟ
ಅರ್ಗೋಡು ಮೋಹನದಾಸ್‌ ಶೆಣೈ (ಉಡುಪಿ)
ಕೆ. ಲೀಲಾವತಿ ಬೈಪಾಡಿತ್ತಾಯ (ದಕ್ಷಿಣ ಕನ್ನಡ)
ಕೇಶಪ್ಪ ಶಿಳ್ಳಿಕ್ಯಾತರ (ಕೊಪ್ಪಳ)
ದಳವಾಯಿ ಸಿದ್ದಪ್ಪ (ಹಂದಿಜೋಗಿ) (ವಿಜಯನಗರ)

ಜಾನಪದ
ಹುಸೇನಾಬಿ ಬುಡೆನ್‌ ಸಾಬ್‌ ಸಿದ್ದಿ (ಉತ್ತರ ಕನ್ನಡ) 
ಶಿವಂಗಿ ಶಣ್ಮರಿ (ದಾವಣಗೆರೆ)
ಮಹದೇವು (ಮೈಸೂರು)
ನರಸಪ್ಪಾ (ಬೀದರ್‌)
‌ಶಕುಂತಲಾ ದೇವಲಾನಾಯಕ (ಕಲಬುರಗಿ)
ಎಚ್‌ ಕೆ ಕಾರಮಂಚಪ್ಪ (ಬಳ್ಳಾರಿ)
ಡಾ ಶಂಭು ಬಳಿಗಾರ (ಗದಗ)
ವಿಭೂತಿ ಗುಂಡಪ್ಪ (ಕೊಪ್ಪಳ)  
ಚೌಡಮ್ಮ (ಚಿಕ್ಕಮಗಳೂರು)

ಸಮಾಜಸೇವೆ
ಹುಚ್ಚಮ್ಮ ಬಸಪ್ಪ ಚೌದ್ರಿ (ಕೊಪ್ಪಳ) 
ಚಾರ್ಮಾಡಿ ಹಸನಬ್ಬ ( ದಕ್ಷಿಣ ಕನ್ನಡ)
ಕೆ.ರೂಪಾ ನಾಯಕ್ (ದಾವಣಗೆರೆ)
ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು ನಿಷ್ಕಲಮಂಟಪ (ಬೆಳಗಾವಿ)
ನಾಗರಾಜು ಜಿ ( ಬೆಂಗಳೂರು)

ಆಡಳಿತ
ಜಿ ವಿ ಬಲರಾಮ್‌ (ತುಮಕೂರು)

ವೈದ್ಯಕೀಯ
ಡಾ ಸಿ ರಾಮಚಂದ್ರ (ಬೆಂಗಳೂರು)
ಡಾ ಪ್ರಶಾಂತ್ ಶೆಟ್ಟಿ (ದಕ್ಷಿಣ ಕನ್ನಡ)

ಸಾಹಿತ್ಯ
ಪ್ರೊ. ಸಿ. ನಾಗಣ್ಣ (ಚಾಮರಾಜನಗರ)
ಸುಬ್ಬು ಹೊಲೆಯಾರ್‌ (ಎಚ್‌.ಕೆ.ಸುಬ್ಬಯ್ಯ) (ಹಾಸನ)
ಸತೀಶ ಕುಲಕರ್ಣಿ (ಹಾವೇರಿ)
ಲಕ್ಷ್ಮೀಪತಿ ಕೋಲಾರ (ಕೋಲಾರ)
ಪರಪ್ಪ ಗುರುಪಾದಪ್ಪ ಸಿದ್ದಾಪುರ (ವಿಜಯನಗರ)
ಡಾ. ಕೆ. ಷರೀಫಾ (ಬೆಂಗಳೂರು)

ಶಿಕ್ಷಣ
ರಾಮಪ್ಪ (ರಾಮಣ್ಣ) ಹವಳೆ ( ರಾಯಚೂರು)
ಕೆ. ಚಂದ್ರಶೇಖರ್ (ಕೋಲಾರ)
ಕೆ.ಟಿ ಚಂದ್ರು (ಮಂಡ್ಯ)

ಕ್ರೀಡೆ
ದಿವ್ಯ ಟಿ.ಎಸ್. (ಕೋಲಾರ)
ಅದಿತಿ ಆಶೋಕ್‌ (ಬೆಂಗಳೂರು)
ಆಶೋಕ್ ಗದಿಗೆಪ್ಪ ಏಣಗಿ (ಧಾರವಾಡ)

ನ್ಯಾಯಾಂಗ
ನ್ಯಾ. ವಿ. ಗೋಪಾಲಗೌಡ (ಚಿಕ್ಕಬಳ್ಳಾಪುರ)

ಕೃಷಿ–ಪರಿಸರ
ಸೋಮನಾಥರೆಡ್ಡಿ ಪೂರ್ಮಾ (ಕಲಬುರಗಿ)
ದ್ಯಾವನಗೌಡ ಟಿ. ಪಾಟೀಲ (ಧಾರವಾಡ)
ಶಿವರೆಸ್ಸಿ ಹನುಮರೆಡ್ಡಿ ವಾಸನ (ಬಾಗಲಕೋಟೆ)

ಸಂಕೀರ್ಣ
ಎ.ಎಂ ಮುದರಿ (ವಿಜಯಪುರ)
ಹಾಜಿ ಅಬ್ದುಲ್ಲಾ ಪರ್ಕಳ (ಉಡುಪಿ)
ಮಿಮಿಕ್ರಿ ದಯಾನಂದ್   (ಮೈಸೂರು)
ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ (ಮೈಸೂರು)
ಲೆ. ಜ. ಕೊಡನ ಪೂವಯ್ಯ ಕಾರ್ಯಪ್ಪ (ಕೊಡಗು)

ಮಾಧ್ಯಮ
ದಿನೇಶ ಅಮೀನ್‌ಮಟ್ಟು (ದಕ್ಷಿಣ ಕನ್ನಡ)
ಜವರಪ್ಪ (ಮೈಸೂರು)
ಮಾಯಾ ಶರ್ಮ (ಬೆಂಗಳೂರು)
ರಫೀ ಭಂಡಾರಿ (ವಿಜಯಪುರ)

ವಿಜ್ಞಾನ‌/ ತಂತ್ರಜ್ಞಾನ
ಎಸ್‌. ಸೋಮನಾಥನ್‌ ಶ್ರೀಧರ್‌ ಪನಿಕರ್‌ (ಬೆಂಗಳೂರು)
ಪ್ರೊ. ಗೋಪಾಲನ್‌ ಜಗದೀಶ್‌ (ಚಾಮರಾಜನಗರ)

ಹೊರನಾಡು/ ಹೊರದೇಶ
ಸೀತಾರಾಮ ಅಯ್ಯಂಗಾರ್‌ 
ದೀಪಕ್‌ ಶೆಟ್ಟಿ
ಶಶಿಕಿರಣ್‌ ಶೆಟ್ಟಿ

ಸ್ವಾತಂತ್ರ್ಯ ಹೋರಾಟಗಾರ
ಪುಟ್ಟಸ್ವಾಮಿಗೌಡ (ರಾಮನಗರ)

ಸಂಘ ಸಂಸ್ಥೆಗಳು
ಕರ್ನಾಟಕ ಸಂಘ (ಶಿವಮೊಗ್ಗ)
ಬಿ.ಎನ್.ಶ್ರೀರಾಮ ಪುಸ್ತಕ ಪ್ರಕಾಶನ (ಮೈಸೂರು)
ಮಿಥಿಕ್ ಸೊಸೈಟಿ (ಬೆಂಗಳೂರು)
ಕರ್ನಾಟಕ ಸಾಹಿತ್ಯ ಸಂಘ (ಯಾದಗಿರಿ)
ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘ (ದಾವಣಗೆರೆ)
ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ದಕ್ಷಿಣ ಕನ್ನಡ)
ಸ್ನೇಹರಂಗ ಹವ್ಯಾಸಿ ಕಲಾ ಸಂಸ್ಥೆ (ಬಾಗಲಕೋಟೆ)
ಚಿಣ್ಣರ ಬಿಂಬ (ಮುಂಬೈ)
ಮಾರುತಿ ಜನಸೇವಾ ಸಂಘ (ದಕ್ಷಿಣ ಕನ್ನಡ)
ವಿದ್ಯಾದಾನ ಸಮಿತಿ (ಗದಗ)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು