ಸೆ.23ರಿಂದ ಯಕ್ಷಾವತರಣ-5: ನೆಡ್ಲೆ ನರಸಿಂಹ ಭಟ್ ಸಂಸ್ಮರಣೆ ಸಪ್ತಾಹದಲ್ಲಿ ತಾಳಮದ್ದಳೆ ವೈಭವ



ಬೆಳ್ತಂಗಡಿ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಉಜಿರೆ ವತಿಯಿಂದ ಯಕ್ಷಗಾನ ಮಹೋಪಾಧ್ಯಾಯ ನೆಡ್ಲೆ ನರಸಿಂಹ ಭಟ್ ಅವರ ಸಂಸ್ಮರಣಾರ್ಥವಾಗಿ 'ಯಕ್ಷಾವತರಣ-5' ಎಂಬ ಯಕ್ಷ ಸಾಂಗತ್ಯ ತಾಳಮದ್ದಳೆ ಸಪ್ತಾಹ ಹಾಗೂ ಯಶೋ ಯಕ್ಷ ನಮನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ ಸೆ. 23 ರಿಂದ 30ವರೆಗೆ ಆಯೋಜಿಸಲಾಗಿದೆ.

ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ.), ಬೆಳ್ತಂಗಡಿ, ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ಬೆಳ್ತಂಗಡಿ ತಾಲೂಕಿನ ಲಾಯ್ಲ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ಸಭಾ ಭವನದಲ್ಲಿ ಕಾರ್ಯಕ್ರಮವು ಜರುಗಲಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಸೆ.23ರಂದು ಭೀಷ್ಮ ಪರ್ವ, ಸೆ.24ರಂದು ಇಂದ್ರತಂತ್ರ-ಪ್ರಹ್ಲಾದಶಾಪ, ಸೆ.25ರಂದು ಶಲ್ಯ ಸಾರಥ್ಯ, ಸೆ.26ರಂದು ವಾಮನ ಚರಿತ್ರೆ, ಸೆ.27ರಂದು ಕರ್ಣಭೇದನ, ಸೆ.28ರಂದು ಅಗ್ನಿಪರೀಕ್ಷೆ - ನಿಜಪಟ್ಟಾಭಿಷೇಕ, ಸೆ.29ರಂದು ಗುರುದಕ್ಷಿಣೆ ಪ್ರಸಂಗಗಳು ಪ್ರತಿ ದಿನ ಸಂಜೆ 4.45ರಿಂದ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ. ಅಂತೆಯೇ, ಸೆ.30ರಂದು ಯಶೋ ಯಕ್ಷನಮನ - ಗಾನ-ನೃತ್ಯ-ಚಿತ್ರ ಕಾರ್ಯಕ್ರಮ ಆಯೋಜಿಸಲಾಗಿದೆ.

ಹಿರಿಯ ಮತ್ತು ಸುಪ್ರಸಿದ್ಧ ಯಕ್ಷಗಾನ ಕಲಾವಿದರು, ಹಿಮ್ಮೇಳ ಮತ್ತು ಮುಮ್ಮೇಳ ತಂಡಗಳು ಈ  ಕಲಾವೈಭವದಲ್ಲಿ ಭಾಗವಹಿಸಲಿದ್ದಾರೆ. (ಕಲಾವಿದರ ವಿವರಕ್ಕೆ ಆಮಂತ್ರಣ ಪತ್ರ ನೋಡಿ)

ಯಕ್ಷಾವತರಣ -5 ಉದ್ಘಾಟನೆಯನ್ನು ಉದ್ಯಮಿ ನೆಡ್ಲೆ ರಾಮ ಭಟ್ ಮಂಗಳೂರು ನೆರವೇರಿಸಲಿದ್ದಾರೆ. ಕುರಿಯ ವಿಠಲ ಶಾಸ್ತ್ರಿ ಪ್ರತಿಭಾ ಪುರಸ್ಕಾರವನ್ನು ಜೀ ವಾಹಿನಿಯ ಡ್ರಾಮಾ ಜೂನಿಯರ್ ವಿಜೇತೆ ರಿಷಿಕಾ ಕುಂದೇಶ್ವರ ಅವರಿಗೆ ನೀಡಲಾಗುತ್ತದೆ.

ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ ಎಂದು  ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಕುಮಾರಸ್ವಾಮಿ ಕನ್ಯಾನ, ಸಂಚಾಲಕ ಉಜಿರೆ ಅಶೋಕ ಭಟ್, ಸ್ಥಾನಿಕ ಸಭಾ ಅಧ್ಯಕ್ಷ  ಶಿವಾನಂದ ರಾವ್, ಕಕ್ಕನೇಜಿ, ರೋಟರಿ ಕ್ಲಬ್ ಬೆಳ್ತಂಗಡಿ ಅಧ್ಯಕ್ಷ ಪೂರನ್ ವರ್ಮ ಉಜಿರೆ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು